July 24, 2025

nimmavaani.com

ಸತ್ಯ, ನ್ಯಾಯ, ನೀತಿ


Italian TrulliItalian Trulli

Addvertisment

ಆರೋಪಿಗಳ ಹೆಸರು ಕೈಬಿಡಲು ಒಂದು ಲಕ್ಷ ಲಂಚ ಕೇಳಿದ ಪೋಲಿಸಪ್ಪ.

{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}

ಆರೋಪಿಗಳ ಹೆಸರು ಕೈಬಿಡಲು ಒಂದು ಲಕ್ಷ ಲಂಚ ಕೇಳಿದ ಪೋಲಿಸಪ್ಪ.

 

 

ದಾವಣಗೆರೆ : ಕುಟುಂಬ ಗಲಾಟೆಯೊಂದರ ಪ್ರಕರಣಕ್ಕೆ ಸಂಬಂಧಿಸಿ ಎಡರು ಮಹಿಳಾ ಆರೋಪಿಗಳ ಹೆಸರನ್ನು ಕೈಬಿಡಲು ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ದಾವಣಗೆರೆ ಪೊಲೀಸ್​ ಅಧಿಕಾರಿ ಇದೀಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲಿಗೆ ಹೋಗಿದ್ದಾರೆ.

 

 

ಒಂದು ಲಕ್ಷ ರೂಪಾಯಿ ಲಂಚದ ಬೇಡಿಕೆಯಿಟ್ಟಿರುವ ಕುರಿತ ದೂರಿನ ಮೇರೆಗೆ 50,000ಲಂಚ ಪಡೆಯುವಾಗಲೇ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯ ASI ಈರಣ್ಣನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

 

 

ಲೋಕಾಯುಕ್ತ ದಾಳಿಗೆ ಕಾರಣ: ಮಣಿಕಂಠ ಆಚಾರ್ಯ ಅವರ ತಾಯಿ ಭಾಗ್ಯಮ್ಮ ಹಾಗೂ ಪತ್ನಿ ಅರ್ಚನಾ ವಿರುದ್ಧ ಗಲಾಟೆ ವಿಚಾರದಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಚಾರ್ಜ್​​​ಶೀಟ್​​​ನಲ್ಲಿ ಹೆಸರು ಕೈಬಿಡಲು ಒಂದು ಲಕ್ಷ ರೂಪಾಯಿಯನ್ನು ಈರಣ್ಣ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಮಣಿಕಂಠ ಆಚಾರ್ಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮೊದಲ ಕಂತಿನಲ್ಲಿ 50 ಸಾವಿರ ರೂಪಾಯಿ ಪಡೆಯುವಾಗ ಈರಣ್ಣನನ್ನು ದಾವಣಗೆರೆ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಉಪಾಧೀಕ್ಷಕಿ ಕಲಾವತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ ಅಪರಾಧಿಯನ್ನು ಬಂಧಿಸಿದ್ದಾರೆ.