19 ನೇ ತಾರೀಕು ಬೆಳಿಗ್ಗೆ ಇಂದಲೇ ಲೋಕಾಯುಕ್ತ ಅಧಿಕಾರಿಗಳು ಬೆಸ್ಕಾಂ ಮತ್ತು ಜಲಮಂಡಳಿ ಸೇರಿದಂತೆ ಬೆಂಗಳೂರಿನ ವಿವಿಧ 45 ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.
ಬೆಂಗಳೂರು ನಗರದ 45 ಕಡೆ ಏಕಕಾಲದಲ್ಲಿ ಬೆಸ್ಕಾಂ ಮತ್ತು ಜಲಮಂಡಳಿ ಸೇರಿ ಇತರೆ ಕಚೇರಿಗಳ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದು. ಲೋಕಾಯುಕ್ತ ಅಧಿಕಾರಿಗಳು ಎಂ.ಜಿ.ರಸ್ತೆಯ ಬೆಸ್ಕಾಂ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ವೇಳೆ ಸರ್ಕಾರಿ ಕಡತ ತೆಗೆದುಕೊಂಡು ಹೋಗುತ್ತಿದ್ದ ಕಾಂಟ್ರಾಕ್ಟರ್ ವಿರುದ್ದ ಉಪ ಲೊಕಾಯುಕ್ತ ಫುಲ್ ಗರಂ ಆಗಿದ್ದಾರೆ. ನೀವು ನಮ್ಮ ಸರ್ಕಾರಿ ಕಡತ ಚೀನಾ, ಪಾಕಿಸ್ತಾನಕ್ಕೆ ಕೊಡಲ್ಲ ಅಂತ ಏನು ಗ್ಯಾರಂಟಿ? ಎಂದು ಬೆಸ್ಕಾಂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.
ಬೆಸ್ಕಾಂ ಕಚೇರಿಯಲ್ಲಿ ಗುತ್ತಿಗೆದಾರನ ಕೈಯಲ್ಲಿ ಕಡತ ನೋಡಿದ ಉಪ ಲೋಕಾಯುಕ್ತರು, ಬೆಸ್ಕಾಂ ಅಧಿಕಾರಿಗಳು ಸರ್ಕಾರಿ ಕಡತ ಚೀನಾ, ಪಾಕಿಸ್ತಾನಕ್ಕೆ ಕೊಡಲ್ಲ ಅಂತ ಏನು ಗ್ಯಾರಂಟಿ ಎಂದು ಗುಡುಗಿದರು.
ಇನ್ನು ಸರ್ಕಾರಿ ಕಡತ ತೆಗೆದುಕೊಂಡು ಹೋಗುತ್ತಿದ್ದ ಕಾಂಟ್ರಾಕ್ಟರ್ ವಿರುದ್ಧ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಉಪ ಲೋಕಾಯುಕ್ತ ಬಿ.ವೀರಪ್ಪ ಸೂಚನೆ ನೀಡಿದ್ದಾರೆ. ಬೆಸ್ಕಾಂ ಇಂಜಿನಿಯರ್ ರಾಜೇಶ್ ಎ1 ಆರೋಪಿ ಮಾಡುವಂತೆ ಸೂಚನೆ ನೀಡಲಾಗಿದೆ.
ಗುತ್ತಿಗೆದಾರ ಪವನ್, ಎಲೆಕ್ಟ್ರಿಕಲ್ ಕೆವಿ ರೆಡ್ಡಿ, ಜ್ಯೋತಿ ಎಲೆಕ್ಟ್ರಿಕ್ಸ್ ರಾಕೇಶ್ ವಿರುದ್ದ ಕ್ರಿಮಿನಲ್ ಕೇಸ್ಗೆ ಸೂಚಿಸಲಾಗಿದೆ. ಅದ್ಹೇಗೆ ಸರ್ಕಾರಿ ಕಡತ ಹೊರಗಡೆಯವರೆಗೆ ಕೊಡುತ್ತೀರಿ? ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಬೀಳುತ್ತೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.
ಸಮವಸ್ತ್ರ ಧರಿಸದ ಸಿಬ್ಬಂದಿಗೆ ಉಪ ಲೋಕಾಯುಕ್ತ ಬಿ. ವೀರಪ್ಪ ಫುಲ್ ಕ್ಲಾಸ್
ಇಂದಿರಾ ನಗರದ ಕೋಡಿಹಳ್ಳಿಯಲ್ಲಿರುವ ಬೆಸ್ಕಾಂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಜೀನ್ಸ್ ಪ್ಯಾಂಟ್, ಟೀ ಷರ್ಟ್ ಧರಿಸಿದ್ದ ಸಿಬ್ಬಂದಿಗೆ ಉಪ ಲೋಕಾಯುಕ್ತ ಬಿ. ವೀರಪ್ಪ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಸ್ಕಾಂ ಪೂರ್ವ ವಿಭಾಗ ಇಂಜಿನಿಯರ್ ಕಚೇರಿಯಲ್ಲಿ ಪರಿಶೀಲನೆ ಮಾಡಲಾಗಿದೆ.
More Stories
ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಕಣ್ಣು ಮುಚ್ಚಿ ಕುಳಿತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು…….
ಧರ್ಮಪುರ ಕೆರೆಗಳಿಗೆ ನೀರು ಹರಿಸಲು ಸಚಿವರಿಗೆ ಮನವಿ….. ಕಸವನಹಳ್ಳಿ ರಮೇಶ್